Posts

Showing posts from September, 2020

ಊರೆಲ್ಲಾ ಅವನದ್ದೇ ಸುದ್ದಿ

Image
                 ನೀವಂದುಕೊಂಡಂತೆ ಇದು ಪ್ರೇಯಸಿಯ ಜೊತೆ ಪರಾರಿಯಾಗಿ ಊರಲ್ಲಿ ಚರ್ಚೆಗೆ ಗ್ರಾಸವಾಗಿರುವ ಯಾವುದೊ ಹುಡುಗನ ಕತೆಯಲ್ಲ. Single boy, ಅಂದರೆ ಒಂಟಿ. ಹಾಗಂತ ಹುಡುಗನಲ್ಲ. ಹೆಜ್ಜೆಯನ್ನು ಅನ್ವೇಷಿಸಿದಾಗ 35 ರಿಂದ 45kg ತೂಗುವ 'ಒಂಟಿ' ಇವನು.  ಎರಡು ಮೂರು ಜನ ಸೇರಿದಲ್ಲೆಲ್ಲಾ ಇವನದ್ದೇ ಸುದ್ದಿ. ಉಜಿರ್ ಕಣಿ ಕೆರೆಪ್ಪುವಲ್ಲಿ, ಕಂಗ್ ತ ಗುಂಡಿ ತೆಗೆಯುವಲ್ಲಿ, ಸಂಕ್ರಮಣದ ತಂಬಿಲದಲ್ಲಿ, ಗದ್ದೆಗೆ ಈಟ್ ಹಾಕುವಲ್ಲಿ ಎಲ್ಲೆಲ್ಲೂ ಅವನದ್ದೇ ಸುದ್ದಿ.             ಇವನು ಮೊದಲು ದಾಳಿಯಿಡಲು ಶುರುಮಾಡಿದ್ದು ಪೂಜಾರಿಯವರ ಹೊಸ ತೋಟದಲ್ಲಿ. ಕಳೆದ ವರ್ಷದವರೆಗೆ ಭತ್ತ ಬೆಳೆಯುತ್ತಿದ್ದ ಪೂಜಾರಿಯವರು 'ನನ ಮಾಂತ ಕಂಡಟ್ ದಾಯ್ತ ಆಪುಂಡು' ಅಂತ ಯೋಚನೆ ಮಾಡಿ ಅರ್ಧ ಮುಡಿ ಗದ್ದೆಯಲ್ಲಿ ನೂರು ಚಿಲ್ಲರೆ ಮಂಗಳ ಹಾಕಿದ್ದಾರೆ. ಮಧ್ಯೆ ಮಧ್ಯೆ ಬಾರೆ. ಗುಂಡಿ ತೆಗೆದು ಹಾಕಿದ ಮಣ್ಣಿನ ಗುಪ್ಪೆ Waste ಆಗುವುದು ಬೇಡ ಎಂದು ಮರಗೆಣಸು ಊರಿದ್ದರು. ಅವರಿಗೆ ಅಡಿಕೆ ಕೃಷಿ ಜೀವಮಾನದಲ್ಲಿಯೇ ಮೊದಲು. ಅರೆಗ್ಗಲದಲ್ಲಿ ಅರ‍್ವತ್ತ ಮತ್ತು ಅಕ್ಕಂದಿರ ಜೊತೆ ತರಕಾರಿ ಬೆಳೆಯುವ ಇವರದ್ದು ಶುದ್ಧ ಅಳಿಯಕಟ್ಟು ಕುಟುಂಬ. ದಾನ, ಧರ್ಮದ ಕುಟುಂಬ ಎಂದರೂ ತಪ್ಪಾಗಲಾರದು. ಊರೆಲ್ಲಾ ತಾವು ಬೆಳೆದ ತರಕಾರಿ ಹಂಚುತ್ತಾರೆ. Lock Down ಸಮಯದಲ್ಲಿ ಊರಿನವರನ್ನು ಸ್ವಥಃ ಬರ...

last scene 03/05/2017

Image
               ಒಂದು ಡೈರಿ ಕಾಣೆಯಾಗಿತ್ತು. ಅಡಿಕೆ ಒಣಗಿಸಲು ಹಾಕಿದ Solar Tarpaulin ನ ಒಳಗೆ ಬಿದ್ದಿದ್ದ ಗೋಣಿ ಚೀಲದಲ್ಲಿ ಹುಡುಕುತ್ತಿದ್ದೆ. Solar Tarpaulin ಅಡಿಕೆ  ಒಣಗಿಸಲು ಇರುವ ವ್ಯವಸ್ಥೆಯಲ್ಲದೆ ಹಲವು ಉಪಯೋಗಗಳನ್ನು ಹೊಂದಿದೆ. ಅವುಗಳಲ್ಲಿ  ತಾತ್ಕಾಲಿಕ ಗುಜರಿ ಶೇಖರಣೆಯೂ ಒಂದು. ಹಾಗೆ ಸುಫಲದ ಗೋಣಿಯಲ್ಲಿ ಹುಡುಕುತ್ತಿದ್ದಾಗ ಪಿ.ಯು.ಸಿ ಯ ದಿನಗಳು ನೆನಪಿಗೆ ಬಂದವು. ಗೋಣಿಯನ್ನು ಅಡ್ಡ ಹಾಕಿದವನೇ C.E.T Question Paperನ್ನು ಹಿಡಿದು ನಿಂತೆ. ದಿನಾಂಕ 03/05/2015 ಎಂದು ನಮೂದಿಸಿತ್ತು. ಅದೇ ದಿನ ನಾನು  ಅವಳನ್ನು ಕೊನೇಯ ಬಾರಿ ಕಂಡದ್ದು.               PUC Exam Centre ಅದಲುಬದಲಾದ ವರ್ಷವದು. ನಮಗೆ ಕೊಂಬೆಟ್ಟು. CCTV Cam3ra ಇಲ್ಲವೆಂದು 'ಕೆಲವರಿಗೆ' ಖುಷಿ ಬೇರೆ. ನಾವು ಮಾತ್ರ ಅಲ್ಲ,  ಅಂಬಿಕದವರೂ ಇದ್ದಾರಂತೆ!!! ಅದೇ 'ಕೆಲವರಿಗೆ' ಮತ್ತಷ್ಟು ಖುಷಿ. ಆದರೆ Bus Stand ನಿಂದ 1km ನಡಿಗೆಯಿದೆ. ತ್ರಿವರ್ಣವನ್ನು ಹೊದ್ದಿರುವ ಕಂಬಗಳನ್ನು ನೋಡಿದಾಗ ಬಾಲ್ಯದ ಪ್ರಾಥಮಿಕ  ನೆನಪಾಗುತ್ತದೆ. ನಾನು ಅವಳನ್ನು ಮೊದಲು ಕಂಡದ್ದು 28/03/2017ರ Electronics Examನಂದು. Exam ಬರೆಯುವವರಲ್ಲಿ ಒಬ್ಬಳಾಗಿದ್ದ ಹುಡುಗಿ ಬರಬರುತ್ತಾ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಳು. ಮುಂದಲೆಯಲ್ಲಿ ಕುಂಕುಮ...